Tuesday 2 December, 2008

The Fuel Knob, The Legend...


The fuel knob of my Pulsar is finally going to retair from its job. This old fella has served for about 4 and half years and is still in healthy condition for more service. But the JP Nagar area, where I stay, is not letting me to use this any more. I had to replace this with one having key-lock. Heavy threats of Petrol thefts in our area made me to take this decision. And I paid a good 100 bucks for a new one with additional servicing charges to the service man to do the fittings.
Sorry and Thanks to my colleagues here for bearing with the smell of Petrol when taking this photograph in my cubicle.

Monday 1 December, 2008

Hitting 1000 Kms !


Saturday evening I was on ride to Puttur through Perla accompanied with my brother and was looking in to the odo meter on my XCD. It hit 1000Kms since I bought it in Sep-28-2008. A nice bike giving me a healthy mileage of about 70Km/Ltr. Tried releasing the throttle for a max of 95Kms so far and then I felt that I shoud not try for any more ;). Bcoz unlike my other Pulsar controlling becomes difficult since there is no disc break in XCD. But for the curved ghat roads there in Perla XCD is serving far good for me.
Thanks to Bajaj, thanks to XCD. :-)

Wednesday 29 October, 2008

ಮೋಡದ ಒಳಗೆ...


ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿದೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಕಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನೇ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ
ನಿನ್ನೇ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ

ನಿಂತಲಿ ನಾ ನಿಲಲಾರೆ ಎಲ್ಲರೂ ಹೀಗಂತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗೂ ನಾನೆ ಪ್ರೀತಿ ಬಲೆಯೊಳಗೂ
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜ್ನೂ ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೆ ಕಾಣದೆ
ನಿನ್ನ ಬಿಟ್ಟು ಹೇಗಿರಬೇಕು ಹೇಳೆ ಕಾಣದೆ |ಮೋಡದ ಒಳಗೆ|

ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರ ಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ ||ಮೋಡದ ಒಳಗೆ||


ಚಿತ್ರ: ಪಯಣ

Friday 24 October, 2008

ಮಾನಸ ಗಂಗೆ...


ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ

ಚಂದಮಾಮ ಕೈ ಚಾಚಿದ ಬಾರೆ ಎಂದು ಗೋಳಾಡಿದ
ಇವಳ ಬಿಟ್ಟು ಹೋಗಲಾರೆ ಊಹುಂ ಎಂದನು
ಅಂತರಂಗ ಹಾಲಾಯಿತು ಅಂತು ಇಂತು ಹೆಪ್ಪಾಯಿತು
ಪ್ರತಿ ಜನ್ಮಕೂ ಇವಳೇ ಎಂದು ಒಪ್ಪಾಯಿತು
ಅಭಿಮಾನಕೂ ಇವಳೇ ಅನುಬಂಧಕೂ ಇವಳೇ
ಅನುರಾಗವು ಇವಳೇ ಅನುಗಾಲವು ಇವಳೇನೆ
ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ

ಕಪ್ಪು ಕಣ್ಣು ಕಾದಂಬರಿ ಕೆನ್ನೆ ಬಣ್ಣ ಕನಕಾಂಬರಿ
ನಾಚಿ ನೀಲಿಯಾಗುವ ನೀಲಾಂಬರಿ
ಮಳೆ ಬಿಲ್ಲು ಮಾತಾಡಿತು ಹೊಸ ಬಣ್ಣ ನೀಡೆಂದಿತು
ನನ್ನ ನಲ್ಲೆ ಕಣ್ಣುಗಳಿಗೆ ಬಲು ರೂಪಸಿ
ನನ್ನ ಪಾಡು ಇವಳೇ ನನ್ನ ಹಾಡು ಇವಳೇ
ನನ್ನ ಜಾಡು ಇವಳೇ ಸಂದೇಶವು ಇವಳೇನೆ
ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ
ಮಾನಸ ಗಂಗೆ ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ


ಚಿತ್ರ: ಪಯಣ

Tuesday 21 October, 2008

ಜೊತೆ ಜೊತೆಯಲಿ...


ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು ಸಸ ರಿರಿ ಗಗ ಮಮ

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ

ದಿನ ದಿನ ದಿನ ಏನಾದರೂ ಚಿನ್ನ
ಕರಗದು ಈ ಪ್ರೇಮ
ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ
ಸಹಿಸದು ಈ ಪ್ರೇಮ
ಆ ಬಾನಿಗಾದರೆ ಮಿನುಗು ತಾರೆ
ಈ ಬಾಳಿಗಾಸರೆ ನೀನೇ ಬಾರೇ
ನಾವಾಡೋ ಒಲವಿನ ಮಾತು ಕೇಳಿ
ಹಾರಾಡೋ ಗಿಳಿಗಳಿಗಾದ ಸಸ ರಿರಿ ಗಗ ಮಮ

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ

ಕಣ ಕಣ ಕಣ ಹೊಸ ಹುರುಪಿನ
ಚಿಲುಮೆಯು ಈ ಪ್ರೇಮ
ಮಿನ ಮಿನ ಮಿನ ಹೊಸ ಬೆಳಕಿನ
ಹೊಳಪಿದು ಈ ಪ್ರೇಮ
ಏಳೇಳು ಜನುಮದ ಜೋಡಿಯಾಗಿ
ಹೀಗೆನೆ ಬಾಳುವೆ ಪ್ರೇಮಿಯಾಗಿ
ಈ ನಮ್ಮ ಪ್ರೀತಿಯ ನೋಡಿ ನೋಡಿ
ಲೋಕವೆ ಹಾಡಿದೆ ಹಾಡು ಸಸ ರಿರಿ ಗಗ ಮಮ

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು ಸಸ ರಿರಿ ಗಗ ಮಮ


ಚಿತ್ರ: ವಂಶಿ

Monday 20 October, 2008

ಭುವನಂ ಗಗನಂ...


ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲು ಹಸಿರನು ನೀಡಿದ
ಇರುಳನು ನೀಗಲು ಹಗಲನು ನೀಡಿದ
ಶರಣು ಎನಲು ಇವನು ಒಲಿದು ಬರುವ
ಎದಿರು ನಿಲಲು ಇವನು ಮುನಿದೇ ಬಿಡುವ |ಭುವನಂ ಗಗನಂ|

ತಾಯಿಗೆ ಮಗನೇ ಜೀವ
ಆ ಮಗನಿಗೆ ತಾಯಿ ದೈವ
ಇಲ್ಲಿ ತ್ಯಾಗ ಪ್ರೀತಿಯ ಕರುಳಿನ ಬಂಧ ನೋಡ
ಜಗದ ಬಾರಿ ಸಾಗರವ ಜಿಗಿದು
ಈಜಿ ಮೀರಿಸುವ ಪ್ರಬಲ ಧೈರ್ಯ ನೀಡಿರುವ ಶಿವನೇ |ಭುವನಂ ಗಗನಂ|

ಕಾಲ ಓಡುತಿದೆ ಬೇಗ ಸರಿಯಾಗಿ ಬಾಳುವುದೇ ಯೋಗ
ಜನಕಾಗಿ ಬಾಳುವ ಸೇವಕ ನಾನು ಈಗ
ಶಿವನು ಮೇಲೆ ನೋಡಿರುವ ಜನರು ಮಾಡೊ ಕಾಯಕವ
ನಿಜದ ಅಂಕೆ ನೀಡಿರುವ ತಿಳಿಯೋ ||ಭುವನಂ ಗಗನಂ||


ಚಿತ್ರ: ವಂಶಿ

Wednesday 15 October, 2008

Tongue Twister

One of the favourite tongue twister taught to me by my uncle in my childhood days,

ಕುಂಟರಣೆ ಕುರುಡರಣೆ
ಕೊಡದೊಳಗೆ ಎರಡರಣೆ.

:-)

Monday 6 October, 2008

ತಂದೆ ತಾಯಿಗಳೆಷ್ಟೋ...

ತಂದೆ ತಾಯಿಗಳೆಷ್ಟೋ ತಾನಿದ್ದ ಊರೆಷ್ಟೋ
ಬಂಧು ಬಳಗಗಳೆಷ್ಟೋ ತನಗೆ ಸತಿ ಸುತರೆಷ್ಟೋ
ಬಂದ ಜನುಮಗಳೆಷ್ಟೋ ಹೊಂದಿದ ಮರಣವೆಷ್ಟೋ
ಒಂದೊಂದು ಎಣಿಕೆಗಾಣೆ ಒಂದೊಂದು ಎಣಿಕೆಗಾಣೆ
ಹಿಂದೆ ಕೊಂದವರ್ಯಾರು ಇಂದು ಸಲಹುವರ್ಯಾರು
ಹಿಂದೆ ಕೊಂದವರ್ಯಾರು ಇಂದು ಸಲಹುವರ್ಯಾರು
ಮುಂದೆ ಬಾರೆಂದೆನ್ನ ಕರೆಯುವರ ನಾ ಕಾಣೆ
ಮುಂದೆ ಬಾರೆಂದೆನ್ನ ಕರೆಯುವರ, ಎನ್ನ ಕರೆಯುವರ ನಾ ಕಾಣೆ
ತಂದೆ ವರಕಾಗಿನೆಲೆಯಾದಿ ಕೇಶವ, ಕಾಗಿನೆಲೆಯಾದಿ ಕೇಶವ
ನಿನ್ನ ದ್ವಂದ್ವ ಪದ ಬಿಡೆನೆ ಕಂಡ್ಯಾ
ನಿನ್ನ ದ್ವಂದ್ವ ಪದ ಬಿಡೆನೆ ಕಂಡ್ಯಾ.


--: ದಾಸರ ಪದಗಳು

Thursday 25 September, 2008

ಕಣ್ಣಿನಲ್ಲಿ ಕಣ್ಣನಿಟ್ಟು...

ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಮನಸು ಕೇಳುವ ನೂರು ಆಸೆಗೆ ಬೇಲಿ ಹಾಕಬಹುದು
ಹೃದಯ ಹಾಡುವ ಉಸಿರ ಲಾಲಿಗೆ ಯಾವ ಬೇಲಿ ಇರದು
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ

ಹೊಸದಾಗಿ ಶುರುವಾಯಿತ ನಮ್ಮೊಳಗೆ ಈ ಗೆಳೆತನ
ನಿನ್ನೆಗಳ ನೆರಳಿಲ್ಲದೆ ಹಾಡುವುದೆ ನೆನಪು ದಿನ
ಮರೆವೆನೆಂದರು ನೀನೀಗ ಮರೆಯಲಾಗದು ಆ ನೋವ
ನೋವ ಎದೆಯೊಳಗೆ ಬಚ್ಚಿಟ್ಟು ಲಾಭವೇನಿದೆ ಓ ಜೀವ
ಹೃದಯದ ಮಾತನು ಒಮ್ಮೆ ಕೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ

ಬಾನೇರೊ ಆ ಮೋಡವು ಹನಿಯಾಗಿ ಧರೆಗಿಳಿಯದೆ
ಈ ಹೃದರು ನಿನ್ನ ಹೆಸರ ಅದು ಮರೆವುದೆ
ಇಂಥ ದಾರೀಲಿ ರೆಕ್ಕೇ ಇಲ್ಲದ ಈ ಪಯಣ
ನಾನಾರೂಪದ ತಿರುವಲ್ಲಿ ಎಲ್ಲೂ ಕಾಣದು ನಿಲ್ದಾಣ
ಮರಳಗೂಡ ಕದಡುವಾಸೆ ಇನ್ನೂ ತೀರಲಿಲ್ಲವೇ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಎರಡು ಮನಸಲು ಒಂದೆ ಮಾತಿದು ಯಾಕೆ ಮಗುವ ಮುನಿಸು
ನಾನು ನೀನು ಇಬ್ಬರು ಎಂದರೆ ನಂಬುವುದೆ ಈ ಮನಸು


ಚಿತ್ರ: ನಿನಗಾಗಿ

Tuesday 16 September, 2008

ಘಳಿ ಘಳಿ ಘಳಿಗೆ...

ಘಳಿ ಘಳಿ ಘಳಿಗೆ ಘಳಿ ಘಳಿ ಘಳಿಗೆ ನಾನರೆಘಳಿಗೆ
ಕಾಡದಿರಲಾರೆ ಕಾಡದಿರಲಾರೆ ನಾ ನಿನ್ನರೆ ಘಳಿಗೆ

ಅಡಿಗಡಿಗಡಿಗೆ ಅಡಿಗಡಿಗಡಿಗೆ ನಾನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ ನಾ ನಿನ್ನಡಿಗಡಿಗೆ

ಘಳಿ ಘಳಿ ಘಳಿಗೆ..
ಘಳಿ ಘಳಿ ಘಳಿಗೆ..

ಆ ಬಾಳೆ ಬನದೊಳಗೆ ಕೂಡಾಯ್ತು ಕಣ್ಣೊಳಗೆ
ಈ ಬಾಳ ಬನದೊಳಗೆ ಮಾತಾಯ್ತು ಮನದೊಳಗೆ

ದುಂಬಿಗಿನ್ನು ಸಿಹಿಯೂಟ ಮೆಲ್ಲ ಮೊಗ್ಗಿನ ಮೊಗದೊಳಗೆ
ನಿದಿರೆಗಿನ್ನು ಜೂಟಾಟ ಹಗಲು ಕಾಣೊ ಕನಸೊಳಗೆ

ಆ ಊಟ..
ಈ ಆಟ..
ಬೇಕಾಯ್ತು ಮನಗಳಿಗೆ || ಘಳಿ ಘಳಿ ಘಳಿಗೆ ||

ನರಗೊಂಬೆ ನಡು ಒಳಗೆ ಬಳುಕಾಯ್ತು ಈ ನಡಿಗೆ
ಪ್ರಿಯವಾದ ತೋಳೊಳಗೆ ಬಿಗಿಯಾಯ್ತು ಮೈಯುಡುಗೆ

ಅರ್ಧನಾರಿ ಪರಮೇಶ ಆಗೋವಾಸೆ ಒಳಗೊಳಗೆ
ಮನ್ಮಥಯ್ಯನ ಉಪದೇಶ ಕೇಳುವಾಸೆ ಕಿವಿಗಳಿಗೆ

ಆ ಆಸೆ..
ಈ ಆಸೆ..
ಬೇಕಾಯ್ತು ಎದೆಯೊಳಗೆ || ಘಳಿ ಘಳಿ ಘಳಿಗೆ ||

ಚಿತ್ರ: ತವರಿಗೆ ಬಾ ತಂಗಿ

Friday 29 August, 2008

ನೀನು ಬಂದ ಮೇಲೆ...


ನೀನು ಬಂದ ಮೇಲೆ ತಾನೆ ಇಷ್ಟು ಚಂದ ಈ ಬಾಳು
ನೀನೆ ತಾನೆ ಹೇಳಿ ಕೊಟ್ಟೆ ಪ್ರೀತಿಸಲು
ಕಂಗಳು ಹಿಂದೆಂದೂ ಕಾಣದ ಹೊಸತೊಂದು ಲೋಕಕೆ ನನ್ನನ್ನು ನೀ ಸೆಳೆದೆ.
ನೀನು ಬಂದ ಮೇಲೆ ತಾನೆ ಇಷ್ಟು ಚಂದ ಈ ಬಾಳು
ನೀನೆ ತಾನೆ ಹೇಳಿ ಕೊಟ್ಟೆ ಪ್ರೀತಿಸಲು
ಕಂಗಳು ಹಿಂದೆಂದೂ ಕಾಣದ ಹೊಸತೊಂದು ಲೋಕಕೆ ನನ್ನನ್ನು ನೀ ಸೆಳೆದೆ.


ಹೆಸರನು ಕೂಡಿಸಿ ಬರೆವ ಆ ಖುಷಿ ಇನ್ನೆಲ್ಲು ನಾ ಕಾಣೆ
ಈ ಪ್ರೀತಿ ಎಂತಹ ಅಸಮಾನ
ಕಾಯಿಸಿ ಕಾಯಿಸಿ ಬರದೆ ಸತಾಯಿಸಿ ಕಾಡೋದು ಪ್ರೀತಿನೆ
ಅದರಲ್ಲೂ ಆಹಾ ಎಂತಹ ಹಿತ

ಒಂದಿಷ್ಟು ಹುಸಿ ಮುನಿಸು ಒಂದಷ್ಟು ಸಿಹಿ ಕನಸು
ಪ್ರೀತಿಸೋರ ಜೋಳಿಗೇಲಿ ಎಂದೂ ಇರಬೇಕು
ಕಂಗಳು ಹಿಂದೆಂದೂ ಕಾಣದ ಹೊಸತೊಂದು ಲೋಕಕೆ ನನ್ನನ್ನು ನೀ ಸೆಳೆದೆ
ನೀನು ಬಂದ ಮೇಲೆ ತಾನೆ ಇಷ್ಟು ಚಂದ ಈ ಬಾಳು
ನೀನೆ ತಾನೆ ಹೇಳಿ ಕೊಟ್ಟೆ ಪ್ರೀತಿಸಲು

ನಡೆದರೆ ನಿನ್ನ ಹೆಜ್ಜೆ ಮೇಲೆ ನನಗದೇ ಸಪ್ತಪದಿ
ಎಂದೆಂದೂ ಮಾತು ತಪ್ಪೊಲ್ಲ

ಮಡಿದರೆ ನಿನ್ನ ಮಡಿಲ ಮೇಲೆ ಎನುವಂತಹ ಒಪ್ಪಂದ
ಇಂದಿಂದ ಒಪ್ಪೊ ಭಗವಂತ
ಇದ್ದರೂ ನಿನ್ನ ಜೊತೆ ಹೋದರೂ ನಿನ್ನ ಜೊತೆ
ನೀನೇ ನಾನು ನಾನೇ ನೀನು ಪ್ರೀತಿ ಮೇಲಾಣೆ
ಕಂಗಳು ಹಿಂದೆಂದೂ ಕಾಣದ ಹೊಸತೊಂದು ಲೋಕಕೆ ನನ್ನನ್ನು ನೀ ಸೆಳೆದೆ
ನೀನು ಬಂದ ಮೇಲೆ ತಾನೆ ಇಷ್ಟು ಚಂದ ಈ ಬಾಳು
ನೀನೆ ತಾನೆ ಹೇಳಿ ಕೊಟ್ಟೆ ಪ್ರೀತಿಸಲು

ನಿನ್ನನೇ ನಾನೆಣಿಸಿ ನನ್ನೆದೆ ಸಂಭ್ರಮಿಸಿ ನಿನ್ನಲೆ ಸಂಪೂರ್ಣ ಈ ಜೀವನ


ಚಿತ್ರ: ಕೃಷ್ಣ

Monday 18 August, 2008

ಈ ಸಂಜೆ ಯಾಕಾಗಿದೆ...

ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ ಈ ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ ಈ ಮೌನ ಬಿಸಿಯಾಗಿದೆ
ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ

ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿದೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ ಮೈಯೆಲ್ಲವು ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ ಈ ಜೀವ ಕಸಿಯಾಗಿದೆ
ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ

ನೀನಿಲ್ಲದೆ ಆ ಚಂದಿರ ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸುನೀಗಿದೆ
ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ ಈ ಗಾಯ ಹಸಿಯಾಗಿದೆ
ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ ಈ ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ ಈ ಮೌನ ಬಿಸಿಯಾಗಿದೆ
ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ


ಚಿತ್ರ: ಗೆಳೆಯ

Monday 11 August, 2008

ಮಾತಿನಲ್ಲಿ ಹೇಳಲಾರೆನು...


ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು
ಆದರೂನೂ ಹಾಡದೇನೆ ಉಳಿಯಲಾರೆನು
ಅಂತಃ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ
ಅಂತಃ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

ಕಣ್ಣಲ್ಲಿದೆ ಆ ಕಣ್ಣಲ್ಲಿದೆ
ಹೊಂಬೆಳಕಿನ ನವ ನೀಲಾಂಜನ
ಇನ್ನೆಲ್ಲಿದೆ ಆಹಾ ಇನ್ನೆಲ್ಲಿದೆ
ಹೂ ಮನಸಿನ ಆ ಮಧುಗೊಂಜನ
ಬೇರೆ ಏನೂ ಕಾಣಲಾರೆ ಯಾರ ನಾನು ದೂರಲಾರೆ
ಸಾಕು ಇನ್ನು ದೂರವನ್ನು ತಾಳಲಾರೆನು
ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ
ಅಂತಃ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು
ಆದರೂನೂ ಹಾಡದೇನೆ ಉಳಿಯಲಾರೆನು

ನಗೆಯಲ್ಲಿದೆ ಆ ಬಗೆಯಲ್ಲಿದೆ
ಬಗೆಹರಿಯದ ಆ ಅವಲೋಕನ
ನಡೆಯಲ್ಲಿದೆ ಆ ನುಡಿಯಲ್ಲಿದೆ
ತಲೆಕೆಡಿಸುವ ಆ ಆಮಂತ್ರಣ
ಕನಸಿಗಿಂತ ಚಂದವಾಗಿ ಅಳಿಸದಂತಹ ಗಂಧವಾಗಿ
ಮೊದಲ ಬಾರಿ ಕಂಡ ಕ್ಷಣವೇ ಬಂಧಿಯಾದೆನು
ಹೋದೆ ನಾನು ಕಳೆದು ದಯಮಾಡಿ ಪತ್ತೆ ಮಾಡಬೇಡಿ
ಅಂತಃ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು
ಆದರೂನೂ ಹಾಡದೇನೆ ಉಳಿಯಲಾರೆನು
ಅಂತಃ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ
ಅಂತಃ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ


ಚಿತ್ರ: ಬೊಂಬಾಟ್

Tuesday 5 August, 2008

ಏನೋ ಇದೆ...


ಏನೋ ಇದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಏನಿದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ
ಬಾಳಿನ ದೀಪವೆ ಇಂದು ಆರಿ ಹೋಗಿದೆ
ನನ್ನಯ ನೆರಳೆ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ ಕಲ್ಲೋಲ ಆಗಿದೆ
ಕರೆಯುವ ಕೊರಳೆ ಮೌನ ತಾಳಿದೆ
ಏನಿದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ

ಓ ತನ್ನ ರಾಗವನ್ನೇ ಹಾಡು ತೊರೆದಂತೆ
ಭಾವದಲ್ಲಿ ಬರೆದ ಚಿತ್ರ ಹರಿದಂತೆ
ಕನ್ನ ಹಾಕಿ ಹೃದಯವನ್ನೆ ಕೊರೆದಂತೆ
ನನ್ನ ಶೋಕ ಗೀತೆ ನಾನೇ ಬರೆದಂತೆ
ಬರಿ ತಾಪವೇ ಪ್ರೀತಿಯ ಫಲವೇ
ಸರಿ ಉತ್ತರ ನೀಡು ನೀ ಒಲವೇ
ಬೆಳದಿಂಗಳೆ ಮರೆಯಾಗಿದೆ ಮರೆಯಾಗಿದೆ
ಆಕಾಶವೆ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ
ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ

ಕಾಡುವಂತ ನೂರು ನೋವು ಇರುಳಲ್ಲಿ
ನಾಟಿದಂತೆ ಬಾಣ ಒಂದು ಎದೆಯಲ್ಲಿ
ನೀನೆ ಬೇಕು ಎಂಬ ನನ್ನ ಛಲದಲ್ಲಿ
ಲೂಟಿ ಆಗಿ ಹೋದೆನಲ್ಲ ಒಲವಲ್ಲಿ
ಇದು ಎಚ್ಚರವಿಲ್ಲದ ಕನಸೇ
ಅಥವಾ ಇದು ಸಾವಿನ ತಿನಿಸೇ
ನಿಜ ಬಣ್ಣವೆ ಬಯಲಾಗಿದೆ ಬಯಲಾಗಿದೆ
ಆಕಾಶವೆ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ
ಬಾಳಿನ ದೀಪವೆ ಇಂದು ಆರಿ ಹೋಗಿದೆ
ನನ್ನಯ ನೆರಳೆ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ ಕಲ್ಲೋಲ ಆಗಿದೆ
ಕರೆಯುವ ಕೊರಳೆ ಮೌನ ತಾಳಿದೆ
ಏನಿದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ


ಚಿತ್ರ: ಸೈಕೋ
ಬರೆದವರು: ಜಯಂತ್ ಕಾಯ್ಕಿಣಿ
ಹಾಡಿದವರು: ರಾಘು ದೀಕ್ಷಿತ್

Friday 18 July, 2008

ನನ್ನ ಎದೆಯಲಿ...

ನನ್ನ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು, ಅಳಿಸಿಬಿಡು
ನಿನ್ನ ಮನಸಿನ ನೆನಪಿನ ಅರಮನೆ ಚಾವಡಿಯಿಂದ ಕಳಿಸಿಬಿಡು
ಕೈ ಮುಗಿವೆ ನನ್ನ ಮರೆತು ಬಿಡು, ಮರೆತು ಬಿಡು, ಮರೆತು ಬಿಡು. |ನನ್ನ|

ಎಂದೋ ಕರಗಿರುವ ಪ್ರೇಮ ಚಂದಮಾಮ
ಹೊರಟು ಹೋದ ಕಾರ್ಮುಗಿಲ ಚಿತೆಗೆ
ಎಂದೂ ಜೊತೆಗೇನೆ ಸಾಗೋ ನನ್ನ ನೆರೆಳು
ಬೇಸರದಿ ಬರುತಲಿದೆ ಜೊತೆಗೆ
ಕತ್ತಲೆಯ ಹೊತ್ತ ಈ ಮುಖವ
ಮರೆತು ಬಿಡು ಬೆಳಕಿನಲೇ. |ನನ್ನ|

ಹಗಲು ಕನಸಿನಲಿ ಗಾಳಿ ಗೋಪುರದಲಿ
ಕುಳಿತೆ ನಾ ಬಳಿದೆ ನಾ ಹೊಳಪು
ನಾಳೆ ಎಂಬುದಕೆ ಹಿಂದು ಮುಂದು ಇಲ್ಲ
ಜೊತೆಗೇಕೆ ಬೆಂಬಿಡದ ನೆನಪು
ಮುಳ್ಳಿರದ ನಿನ್ನ ದಾರಿಯಲಿ ತಿರುಗದಲೇ ನಡೆದು ಬಿಡು
ಅಂತಃಪುರದ ಬಾಗಿಲು ಬಡಿದ ಕೈಗಳ ತಪ್ಪನು ಕ್ಷಮಿಸಿ ಬಿಡು, ಕ್ಷಮಿಸಿ ಬಿಡು
ಅಂಗಳದ ನನ್ನ ಕಾಲ್ಗುರುತು ನಗು ನಗುತ ಅಳಿಸಿಬಿಡು.

ಚಿತ್ರ: ಅರಮನೆ

Wednesday 2 July, 2008

ನೆನಪಾಗದೇ...

ನೆನಪಾಗದೇ ನೆನಪಾಗದೇ ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೇ
ನೆನಪಾಗದೇ ನೆನಪಾಗದೇ ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೇ
ನೀನೇ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
ತಪ್ಪೇ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
ನೆನಪಾಗದೇ ನೆನಪಾಗದೇ ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೇ

ಸ್ವಾತಿ ಹನಿ ಮುತ್ತಾಯಿತು ಈ ನನ್ನೆದೆಯ ಚಿಪ್ಪಿನಲಿ
ಇನ್ಯಾರದೋ ಕೈ ಸೇರಿತು ಬರಿ ನೋವೊಂದೆ ಉಳಿದಿತ್ತು ಇಲ್ಲಿ
ಸರಿಯೇ ಈ ರೀತಿಯು ಭ್ರಮೆಯೇ ಆ ಪ್ರೀತಿಯು ಅರಿಯೆ ನಾನೇನನೂ
ನೀನೇ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
ತಪ್ಪೇ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
ನೆನಪಾಗದೇ ನೆನಪಾಗದೇ ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೇ

ನಾನಂಬಿದೆ ನಿನ್ನೊಲವನು ನನ್ನ ನಂಬಿಕೆಯೇ ಉರುಳಾಯಿತೇ
ಈ ಪ್ರೀತಿಯು ತನನಂ ಊರಲು ಅದು ಎಂದೆಂದು ಕಾಯುವುದಂತೆ
ಬದುಕೇ ಅಯೋಮಯ ಬಿಡು ನೀ ಹತಾಶೆಯ ಇರಲಿ ಸದಾಶಯ
ನೀನೇ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
ತಪ್ಪೇ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ

ನೆನಪಾಗಿದೇ ನೆನಪಾಗಿದೇ ಆ ಕ್ಷಣಗಳು ಆ ದಿನಗಳು ನನಗೀಗ ನೆನಪಾಗಿದೇ.



ಚಿತ್ರ: ಹುಡುಗಾಟ

Monday 23 June, 2008

ಮಂದಾರ ಮಂದಾರ...


ಮಂದಾರ ಮಂದಾರ ಮಂದಾರವೋ
ನಿನ್ನಂದ ನಿನ್ನಂದ ಮಂದಾರವೋ
ನೋಡೋಕೆ ಕಣ್ಸಾಲದು
ಈ ನಿನ್ನ ಸೌಂದರ್ಯವ
ಈ ನಿನ್ನ ಸೌಂದರ್ಯವ
ಯಾರೋ ಕರೆದೋರು ಈ ಚೈತ್ರವ
ಯಾರೋ ಬರೆದೋರು ಈ ಚಿತ್ರವ
ನೋಡೋಕೆ ಕಣ್ಸಾಲದು
ಈ ನಿನ್ನ ಸೌಂದರ್ಯವ
ಈ ನಿನ್ನ ಸೌಂದರ್ಯವ |ಮಂದಾರ|

ಅಂಬಾರಿಯ ಮೇಲೇರುತ ಬಂದ ಬಂದ ಸುಂದರಾಂಗ ನಿನ್ನ ವರಿಸೋಕೆ
ಬಂಗಾರದ ಕಾಲ್ಗೆಜ್ಜೆಯ ತಂದ ತಂದ ನಿನ್ನ ಪಾದ ಸಿಂಗರಿಸೋಕೆ
ಇಂದು ಬೆರಳಿಗೆ ಹಾಕುತಾನೆ ತಂದು ಚಂದ್ರನ ಉಂಗುರ
ನೀನೆ ನೀನೆ ಅವನಿಗೆ ಒಡತಿ ||ಮಂದಾರ||

ಮುಸ್ಸಂಜೆಯ ಆ ನೇಸರ ನಿನ್ನ ಅಂದ ಚಂದ ಕಂಡು ಯಾಕೋ ಮುಸುಕಾದ
ಉಕ್ಕೇರಿತು ಆ ಸಾಗರ ನಿನ್ನ ಮೈಯ ಹುಣ್ಣಿಮೆಯ ಬೆಳದಿಂಗಳಿಂದ
ಪ್ರೀತಿ ಹಕ್ಕಿಯು ಹಾರಿ ಹೋಗಿ ಬೇರೆ ಗೂಡನು ಸೇರಿತು
ಈ ಕಂಬನಿ ಹಾಡಾಯಿತು ನನ್ನ ದನಿ ಮೂಕಾಯಿತು ||ಮಂದಾರ||


ಚಿತ್ರ: ಅಂತು ಇಂತು ಪ್ರೀತಿ ಬಂತು

Friday 20 June, 2008

ಗೇಟಿನ ಮೇಲೇರಿ...



ಆ ದಿನಗಳಲ್ಲಿ, ದಿನಕ್ಕೆ ಹತ್ತಾರು ಬಾರಿಯಾದರೂ ಈ ಗೇಟನ್ನು ಏರದಿದ್ದರೆ ಅವತ್ತಿನ ಕೆಲಸಗಳು ಪೂರ್ತಿಯಾಗುತ್ತಿರಲಿಲ್ಲ! ಮನೆಯ ಎದುರುಗಡೆ ಇರುವ ಈ ದೊಡ್ಡ ಗೇಟನ್ನು ಒಮ್ಮೆಯಾದರೂ ಏರಿ ಅದರ ಚಿಲಕವನ್ನೊಮ್ಮೆ ಜೋರಾಗಿ ಎಳೆದು ಬಿಟ್ಟು ಠಂಯ್.. ಠಂಯ್.. ಎಂದು ಸದ್ದು ಮಾಡುವುದರಲ್ಲೇ ಒಂದು ಮೋಜು. ಆಮೇಲೆ ಅಮ್ಮ, ಅಪ್ಪ ಇಲ್ಲವೇ ಯಾರಾದರೂ ಬಂದು ಕೆಳಗಿಳಿಸುವವರೆಗೆ ಸಾಗುತ್ತಿತ್ತು ನನ್ನ ಸರ್ಕಸ್, ಇಲ್ಲವೇ ದಣಿವಾಗುವವರೆಗೆ.

ಅದೇ ಮೊನ್ನೆ ಶೇಣಿಗೆ ಹೋಗಿದ್ದಾಗ ಅಣ್ಣನ ಮಗರಾಯ ಶಮಂತನ ಇದೇ ಆಟವು ಸಾಗುತ್ತಿತ್ತು ಅದೇ ಗೇಟಿನ ಮೇಲೇರಿ. ಆ ನೆನಪುಗಳಲ್ಲಿ ಈ ಒಂದು ಫೋಟೋ.

Thursday 19 June, 2008

ಎಕ್ಕೆ ಹೂವು

ನೀವು ಎಕ್ಕೆ ಗಿಡದ ಹೂವನ್ನು ನೋಡಿಲ್ಲವೇ? ಹಾಗಿದ್ದರೆ ಇಲ್ಲಿ ನೋಡಿ.



ಹೋಮ ಹವನಾದಿ ಪೂಜಾ ಕಾರ್ಯದಲ್ಲಿ ಎಕ್ಕೆಯೂ ಒಂದು ಪ್ರಧಾನ ಪೂಜಾ ಸಮಿತ್ತು.

ಶಾಲೆಗೆ ಹೋಗುತ್ತಿರುವಾಗ ನಾವು ಹೂವಿನ ಮೊಗ್ಗನ್ನು ಹಿಡಿದು ಹಿಚುಕಲು ಪಟ ಪಟ ಶಬ್ದವನ್ನು ಮಾಡುತ್ತ ಹೂವು ಬಿರಿಯುತ್ತಿತ್ತು. ಆದರೆ ನಂತರ ಬರುವ ಕೈಯ ವಾಸನೆಯು ಮಾತ್ರ ಸಹಿಸಲಾಗುತ್ತಿರಲಿಲ್ಲ!

Wednesday 18 June, 2008

ಗಡಿಯಾರ ಹೂವು


ಇದೊಂದು ಕಾಡು ಸುಮವಾಗಿದ್ದು ಬಳ್ಳಿಯಲ್ಲಿ ಅರಳುತ್ತದೆ. ನಮ್ಮ ಮನೆಯ ಹಿಂದಿನ ಬರೆಯಲ್ಲಿ ಬೆಳೆಯುವ ಈ ಹೂವು ಪ್ರತಿ ವರ್ಷವೂ ಮಳೆಗಾಲದಲ್ಲಿ ಕಾಣಸಿಗುತ್ತದೆ. ಗಡಿಯಾರದಲ್ಲಿ ಸೆಕುಂಡು, ನಿಮಿಷ, ಮತ್ತು ಗಂಟೆ ಮುಳ್ಳುಗಳಿರುವಂತೆ ಈ ಹೂವಿನ ದಂಟಿನಲ್ಲೂ structures ಕಾಣಬಹುದು.

Tuesday 17 June, 2008

ಸಿಹಿ ಗಾಳಿ...

ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ
ಲೋಕವೊಂದೇ ಸಾಕು ದಿನವು ಎಳೆಯಲೇ ಬೇಕು
ಪ್ರೇಮಾಮೃತದ ಗೀತೆ ಬರೆಯೋಣ ಬಾ

ಬಾನಾಡಿಗೊಂದು ಸವಿ ಮಾತು ಕಲಿಸುವ
ಆ ವೀಣೆಗೊಂದು ಎದೆ ರಾಗ ತಿಳಿಸುವ
ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ
ಅರಳುತಿರೋ ಹೂಗಳಿಗೆ ಒಲವ ಸುಧೆಯ ಕೊಡುವ
ನಾನಾನ.. ಬಾಳಿನ ಅರ್ಥವೇ ಪ್ರೇಮವೆಂಬುದಲ್ಲವೇ
ಪ್ರೇಮವೇ ಇಲ್ಲದೆ ನಾನು ನೀನು ಯಾಕೆ.


ಚಿತ್ರ: ಆ ದಿನಗಳು

ಆ ದಿನಗಳು...


ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ ಇದೆ ನನ್ನ ಬಿಡದೆ
ಗಾಳಿಯಲ್ಲಿ ಪ್ರೇಮಗೀತೆ ಬರೆದ ಸಂದೇಶವು
ಬಳಸಿ ಬಂದು ಹೇಳಲಿಲ್ಲವೆ ನನ್ನ ಈ ಸ್ನೇಹವು
ಪ್ರೀತಿಯ ಈ ಹಾದಿ ಏಕೆ ಬಿಟ್ಟು ಹೋದೆ

ದಿನ ದಿನ ಮುಖವನು ನೋಡಿ ಹೊಗಳುವ ಮಾತೆಲ್ಲಿ
ಮುನಿಯುತ ಜಗಳವ ಆಡಿ ನಟಿಸಿದ ನಗುವೆಲ್ಲಿ
ನನ್ನ ಕಲ್ಪನೆ ಎಲ್ಲೋ ನಿನ್ನ ಹುಡುಕಿ ಹೋಯ್ತು
ಆ ಶಿಲ್ಪದಲಿ ಕಂಡು ಮನಸು ಶಾಂತವಾಯ್ತು
ನೀನೆಲ್ಲೋ ನಾನೆಲ್ಲೋ ಇನ್ನು ತಾಳೆ ವಿರಹ ನೋವ.


ಚಿತ್ರ: ಆ ದಿನಗಳು

Wednesday 11 June, 2008

On the way to Bheemeshwari and Chunchi Falls

May 24th, Saturday, ನಮ್ಮ gang ಹೊರಟಿದ್ದು ಭೀಮೇಶ್ವರಿಗೆ. ಅವಿನಾಶ, ಅಭಿಲಾಶ, ಪ್ರವೀಣ, ಶ್ಯಾಮ್, ಮತ್ತು ಗಣೇಶ್ ಜೊತೆಗೆ ನಮ್ಮ ನಮ್ಮ 3 Pulsar bikesನಲ್ಲಿ NH-209ನಲ್ಲಿ ಬೆಂಗಳೂರಿಂದ ಹೊರಟ ನಾವು ಕನಕಪುರ, ಸಾತನೂರು ಆಗಿ ಮುತ್ತತ್ತಿಗೆ ಬಂದೆವು. ಈ ಸ್ಥಳ ಕನಕಪುರದಿಂದ ಸುಮಾರು 25ರಿಂದ 30Km ದೂರ ಇರಬಹುದು. ಭೀಮೇಶ್ವರಿ ಇರುವುದು ಮುತ್ತತ್ತಿಯಲ್ಲೆಯೇ.



ಕಾವೇರಿ ನದಿಯು ಹರಿದು ಹೋಗುವ ಈ ಸ್ಥಳದಲ್ಲಿ ಬೆಂಗಳೂರಿನಿಂದಲೇ advance booking ಮಾಡಿ ಬಂದವರಿಗೆ Kaveri Fishing Campನಲ್ಲಿ stay ಮಾಡುವ ಸೌಲಭ್ಯವಿದೆ. ಹಾಗೆಯೇ ಒಳ್ಳೆಯ ನೀರಿರುವ ಸಮಯದಲ್ಲಿ rafting ಮಾಡಲೂ ಅನುಕೂಲಗಳಿವೆ. Govt. of Karnataka undertaking ಇಲ್ಲಿ ಪ್ರವೇಶ ಸಿಗಲು ಮುಂಗಡ ಕಾದಿರಿಸುವಿಕೆ ಅಗತ್ಯ. ಹಾಗೆಯೇ ಇಲ್ಲಿ Elephant Ride ಕೂಡ ಇದೆ.



Water level ತಕ್ಕ ಮಟ್ಟಿಗೇ ಇದ್ದ ಕಾವೇರಿ ತೀರದಲ್ಲಿ ಸ್ವಲ್ಪ ಹೊತ್ತಿನ ಮಟ್ಟಿಗೆ ದಣಿವಾರಿಸಿಕೊಂಡು ಹಾಗೆಯೇ ಕೆಲವು Photo sessions ಮಾಡ್ಕೊಂಡ್ವಿ.




ಆಗಲೇ ಮಧ್ಯಾಹ್ನವಾಗಲು ತುಂಬಾ ಹಸಿದಿದ್ದ ನಾವು 8Km ಹಿಂದೆ ಇದ್ದ ಸಾತನೂರಿಗೆ ಬಂದೆವು. ಮುತ್ತತ್ತಿಯಲ್ಲಿ ಯಾವುದೇ ಅಂಗಡಿ, ಹೋಟೆಲುಗಳ ಸೌಲಭ್ಯವಿಲ್ಲದ್ದರಿಂದ ನಮಿಗೆ ಬೇರೆ alternatives ಇರಲಿಲ್ಲ. ಸಣ್ಣ ಹೋಟೆಲಲ್ಲಿ curd rice, ಬಾಳೆಹಣ್ಣುಗಳಲ್ಲೇ ಊಟ ಮಾಡಿದ ನಮಿಗೆ ಹಸಿವು ನಿಂತರೂ ಪಯಣದ ಹಸಿವು ನಿಂತಿರಲಿಲ್ಲ. ಹತ್ತಿರದಲ್ಲೇ ಸುಮಾರು 12Km ದೂರದಲ್ಲಿ ಮೇಕೆದಾಟು ಇರುವುದನ್ನು ತಿಳಿದ ನಾವು ಅತ್ತ ಕಡೆಗೆ ಪಯಣ ಮುಂದುವರಿಸಿದೆವು. ಅಷ್ಟರಲ್ಲಾಗಲೇ ಮೋಡ ಕವಿದ ವಾತಾವರಣವಿದ್ದು ಸ್ವಲ್ಪದರಲ್ಲೇ ಮಳೆಯೂ ಶುರುವಾಯಿತು.




ಸಂಗಮ ತಲುಪಿದ ನಾವು ಮೇಕೆದಾಟು ಹೋಗಲು ಇನ್ನು ನಾಲ್ಕೇ Km ಇರುವುದು. ಆದರೆ ಇಲ್ಲಿಂದ ನಾವು bikeನಲ್ಲಿ ಹೋಗುವಂತಿಲ್ಲ. ಕಾವೇರಿ ಹೊಳೆಯನ್ನು ತೆಪ್ಪಗಳ ಸಹಾಯದಿಂದ ದಾಟಿ ಆಚೆ ಬದಿಯಲ್ಲಿರುವ ಬಾಡಿಗೆ Jeepಗಳ ಸಹಾಯ ಪಡೆಯಬೇಕು. ಆಗಲೇ ಮಳೆಯೂ ಇದ್ದಿದ್ದರಿಂದ ನಮಿಗೆ ಯಾರಿಗೂ ಅತ್ತ ಕಡೆ ನಮ್ಮ bikeನ್ನು ಬಿಟ್ಟು ಹೋಗಲು ಮನಸ್ಸು ಬರಲಿಲ್ಲ. ದಾರಿಯಲ್ಲೇ ನಾವು ಚುಂಚಿ ಜಲಪಾತದ ಮಾರ್ಗ ಸೂಚಿಯನ್ನು ನೋಡಿದ್ದು ಎಲ್ಲರೂ ಜಲಪಾತಕ್ಕೆ ಹೋಗಲು ನಿರ್ಧರಿಸಿದೆವು. ಸಾತನೂರಿಂದ ಮೇಕೆದಾಟು ಬರುವ ದಾರಿಯಲ್ಲಿ ಎಡಕ್ಕೆ ಸುಮಾರು 6Km ಹೋಗಲು ಈ ಜಲಪಾತ ಬರುವುದು.




ಸಾಧಾರಣದಿಂದ ಸುಮಾರು ನೀರು ಇದ್ದ ಚುಂಚಿ ನೋಡಲು ರಮ್ಯ ಮನೋಹರವಾಗಿತ್ತು. ಬಂಡೆಗಳ ಮೇಲಿಂದ ಕೆಳಗಿಳಿಯುತ್ತಾ ಸುಮಾರು ಅರ್ಧದಷ್ಟು ಜಲಪಾತದ ಕೆಳಗೆ ಇಳಿದು ನೋಡಿದೆವು. ಅಲ್ಲಿಂದ ನಂತರ ಬೆಂಗಳೂರಿಗೆ ಹಿಂತಿರುಗಲು ದಾರಿಯುದ್ದಕ್ಕೂ ಮಳೆಯ ಸಾಥ್ ನಮ್ಮನ್ನು ಬಿಡಲಿಲ್ಲ.





Monday 9 June, 2008

ಪ್ರೀತಿ ಮೂಡೋ ವೇಳೆ...

ಪ್ರೀತಿ ಮೂಡೋ ವೇಳೆ ಬದುಕೇ ಸುಂದರ ನಾಳೆ
ಆಸೆ ಅಲೆ ಮೇಲೆ ಜೀವದುಯ್ಯಾಲೆ

ಕಣ್ಣುಗಳ ಕನಸುಗಳು ಕವನಗಳಾಗೋ ವೇಳೆ
ಮನಸಿನ ಹೂ ಮುಂಗಾರ ಮೋಡ ಮಿಂಚಿನ ಮಾಲೆ
ಹೃದಯದಲಿ ಚಿಮ್ಮುತಿದೆ ನೂರು ಹೊಸ ಹೊಸ ಭಾವ
ಆಳದಲಿ ತುಡಿಯುತಿದೆ ನಿನ್ನನು ಸೇರಲು ಜೀವ
ಯಾವುದೀ ಸ್ಪಂದನ ಪ್ರೇಮಗಾನ ಜೀವಗಾನ

ನಾವಿಡುವ ಸಪ್ತಪದಿ ಕೋಟಿ ಜನುಮಕ್ಕಿರಲಿ
ನೀ ಕಟ್ಟೋ ಮಾಂಗಲ್ಯ ದಿನವೂ ಸಡಗರ ತರಲಿ
ಸೇರಕ್ಕಿ ನಾ ಕೆಡವಿ ತುಂಬುವೆ ನಿನ್ನ ಮನೆಯ
ಪ್ರೀತಿಯ ಹೂವು ನೀ ಮುಡಿಸಿ ತುಂಬು ಬಾಳೋ ಗೆಳೆಯ
ಏನಿದೀ ಬಂಧನ ಜೀವಗಾನ ಅಮರಗಾನ


ಚಿತ್ರ: ಆಕ್ಸಿಡೆಂಟ್
ಬರೆದವರು: ರಾಜೇಂದ್ರ ಕಾಮತ್

ನಿನದೇ ನಿನದೇ ನೆನಪು...

ನಿನದೇ ನಿನದೇ ನೆನಪು ನಿನಗೆ ಜೀವ ಮುಡಿಪು
ನಿನ್ನ ಸಾಧನೆಯೇ ನಿತ್ಯೋತ್ಸವವು

ನಿನ್ನ ಕನಸ ಜೋಗುಳದೊಡನೆ ರಾತ್ರಿ ನಿದ್ದಿಸುತಿರುವೆ
ನಿನ್ನ ನೆನಪ ನೇಸರ ನೋಡುತ ದಿನವೂ ಏಳುತ್ತಿರುವೆ
ಸೌಂದರ್ಯ ಸೌಜನ್ಯ ಸೇರಿಹ ಸವಿ ಸವಿ ನಶೆ ನೀನು
ತಾರೆಗಳಂತೆ ಹೂವುಗಳಂತೆ ಪ್ರಕೃತಿ ನೀಡಿದ ವರ ನೀನು
ಯಾವುದೀ ಸ್ಪಂದನ ಪ್ರೇಮಗಾನ ಜೀವಗಾನ

ಕಣ್ಣ ಹರಿಸಿದ ಕಡೆಯೆಲ್ಲ ನಿನ್ನ ನಗುವಿನ ಜಾತ್ರೆ
ಜನ್ಮ ಜನ್ಮಕೂ ಜೊತೆಗಿರು ನೀ ಮಾಡುವ ಪ್ರೀತಿಯ ಯಾತ್ರೆ
ಸಾವಿರ ಜನರ ನಡುವಲ್ಲೂ ನೀನಿರದೇ ನಾ ಒಂಟಿ
ದೂರದಲ್ಲಿದ್ದರೂ ನೀನು ಹತ್ತಿರ ಹತ್ತಿರ ತುಂಟಿ
ಯಾವುದೀ ಬಂಧನ ಜೀವಗಾನ ಅಮರಗಾನ


ಚಿತ್ರ: ಆಕ್ಸಿಡೆಂಟ್
ಬರೆದವರು: ರಾಜೇಂದ್ರ ಕಾಮತ್

Wednesday 4 June, 2008

ನಗೂ ಎಂದಿದೆ...

ನಗೂ ಎಂದಿದೆ ಮಂಜಿನ ಬಿಂದೂ
ನಲೀ ಎಂದಿದೆ ಗಾಲಿ ಇಂದೂ

ಚಿಲಿಪಿಲಿಯೆಂದೂ ಹಕ್ಕಿಯು ಹೇಳಿದೆ ಈಗಾ ಬಾ ಬಾ
ಜೊತೆಯಲಿ ಕೂಡಿ ನನ್ನಂತೆ ಹಾರು ನೀ ಬೇಗ ಬಾ ಬಾ
ಹಾರಲು ಆಗದೆ ಸೋತಿರಲು
ಬಾಳಿಗೆ ಗೆಳೆಯನು ಬೇಕಿರಲು
ಬಯಸಿದೆ ಅರಸಿದೆ ನಾ
ಕಂಡೆ ಈಗಲೇ ನಾ ನನ್ನ ಸ್ನೇಹಿತನಾ...

ನಗೂ ಎಂದಿದೆ ಮಂಜಿನ ಬಿಂದೂ
ನಲೀ ಎಂದಿದೆ ಗಾಲಿ ಇಂದೂ..

ತಾ ನಾ ತನನನನ ತನನಾನ
ತನನನ ತನನನ ನಾನ
ತಾ ನಾ

ಹಾಡುವ ಬಾ ಬಾ ನದಿಯಲೆ ಕೊಡುವುದು ಜಾಗ ಈಗ
ಕುಣಿಯುವ ಬಾ ಬಾ ಮಳೆ ಹನಿ ತರುವುದು ತಾಳ ಮೇಳ
ಪ್ರಕೃತಿಯು ಬರೆದ ಕವನವಿದೂ
ಮಮತೆಯ ಸೊಬಗಿನ ಪಲ್ಲವಿಯೊ
ಸುಂದರ ಸ್ನೇಹವಿದೂ
ಇಂತಃ ಅನುಬಂಧಾ ಎಂತಃ ಆನಂದಾ

ಇದೇ ನಗುವ ಮನದಾ ಸ್ಪಂದಾ
ಸವೀ ಮಧುರಾ ಮಮತೆ ಬಂಧಾ


ಚಿತ್ರ: ಪಲ್ಲವಿ ಅನುಪಲ್ಲವಿ
ಬರೆದವರು: ಆರ್. ಎನ್. ಜಯಗೋಪಾಲ್

ಕುಂಟಂಗೇರ್

ಊರಿನವರ ಬಾಯಿಯಲ್ಲಿ ಕುಂಟಂಗೇರ್ (ಕುಂಟ ನೇರಳೆ ಹಣ್ಣು) ಎಂದೇ ಪ್ರಸಿದ್ಧಿ ಪಡೆದಿರುವ ಈ ಹಣ್ಣು ಕೂಡ ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತದೆ. ಗುಡ್ಡೆಗಳಲ್ಲಿ ಕಾಡು ಸಸ್ಯದಲ್ಲಿ ಬೆಳೆಯುವ ಇದು ಮಲೆನಾಡಿನ ಅಡಿಕೆ ಕೃಷಿಕರಿಗೆ ತೋಟಕ್ಕೆ ಒಳ್ಳೆಯ ಸೊಪ್ಪು ಗೊಬ್ಬರವೂ ಹೌದು.



ತಿನ್ನಲು ಬಾಯಿಯಲ್ಲಿ ಪೆನ್ನಿನ ಶಾಯಿಯಂತೆ ನೇರಳೆ ಬಣ್ಣ ಹರಡುವುದರಿಂದಲೇ ಇರಬೇಕು ಇದರ ಈ ಹೆಸರು. ರುಚಿಯಲ್ಲಿ ಸ್ವಲ್ಪ ಸಿಹಿಯೂ ಸ್ವಲ್ಪ ಹುಳಿಯೂ ಇರುವ ಈ ಹಣ್ಣು ಜ್ವರ, ಶೀತದಂತಹ ಅಸೌಖ್ಯಕ್ಕೆ ಬಹು ಬೇಗನೆ ಕಾರಣವಾಗುತ್ತದೆ.

Tuesday 3 June, 2008

ದೇವರ ಹುಳ

ಮೊನ್ನೆ ಶನಿವಾರ "ಶೇಣಿ"ಗೆ ಹೋಗುವಾಗ ಈ ಅಪರೂಪದ ನೆಂಟನ ಭೇಟಿಯಾಯ್ತು ನೋಡಿ. ಕೂಡಲೇ ಚೀಲದೊಳಗೆ ಇಳಿದ ನನ್ನ ಕ್ಯೆ ಕೆಲವು ಫೊಟೋಗಳನ್ನು ಕ್ಲಿಕ್ಕಿಸಿತು. ತುಂಬಾ ಅವಸರದಲ್ಲಿ ಓಡಾಡುತ್ತಿದ್ದ ಇವನನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲು ಸೆಕೆಂಡುಗಳಿಂದ ಕೆಲವು ನಿಮಿಷಗಳೇ ಹಿಡಿಯಿತು.


ಇದೊಂದು ತುಂಬಾ ಸೌಮ್ಯ ಸ್ವಭಾವದ ಕೀಟವಾಗಿದ್ದು ಮಲೆನಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಮಳೆಗಾಲದಲ್ಲಿ ಮಳೆ ಬಂದು ನಿಂತ ಕೂಡಲೇ ಇವು ಹೊರಗಡೆ ಕಾಣಸಿಗುತ್ತವೆ. ಗಾತ್ರದಲ್ಲಿ ಸಾಧಾರಣ ಜೀರುಂಡೆಗಳಿಗಿಂತ ಸಣ್ಣಗೂ ಇರುವೆಗಿಂತ ದೊಡ್ಡಗೂ ಇರುತ್ತವೆ.
ನಾವು ಶಾಲೆಗಳಿಗೆ ಹೋಗುತ್ತಿರುವ ಸಮಯದಲ್ಲಿ ಈ ಕೀಟಗಳು ಸಿಕ್ಕಿದರೆ ಸಣ್ಣ ಕೋಲಿನಿಂದ ಚುಚ್ಚಿ ಇಲ್ಲವೇ ನೂಕಿಕೊಂಡು ಇದಕ್ಕೆ ಉಪಟಳಗಳನ್ನು ಕೊಡುತ್ತಿದ್ದೆವು. ಅದಕ್ಕಾಗಿ ಅಮ್ಮ ನೋಡಿದರೆ ನನಗೆ ಯಾವಾಗಲೂ ಹೇಳುವರು, "ಅದು ದೇವರ ಹುಳ, ಅದಿಕೆ ತೊಂದರೆ ಕೊಡಬೇಡ" ಎಂದು. ಹಾಗಾದರೂ ಈ ಮಕ್ಕಳು ಅದನ್ನು ಸುಮ್ಮನೆ ಬಿಡಲಿ ಎಂದು.

Thursday 29 May, 2008

ಸ್ಟಾಂಡಿಂಗ್ ಹೋಟೆಲ್

ಅರೇ! ಇದೆಂತರ "ಸ್ಟಾಂಡಿಂಗ್ ಹೋಟೆಲ್" ಹೇಳಿದರೆ? ಹೇಳಿ ನಿಂಗೊ ಕೇಳಲೂ ಸಾಕು. ಸತ್ಯಕ್ಕೂ ಹೇಳಕ್ಕಾದರೆ ನಿಂಗೊಗೆ ಹೆಚ್ಚಿನವಕ್ಕೂ ಇದೆಂತರ ಹೇಳಿ ಕೇಳಿ ಗೊಂತಿರ. ಆದರೆ ಬೆಂಗಳೂರಿಂಗೆ ಬಂದವೆಲ್ಲರೂ ಒಂದರಿಯಾದರೂ ಈ ಸ್ಟಾಂಡಿಂಗ್ ಹೋಟೆಲ್ಲುಗೊಕ್ಕೆ ಹೋಗಿಪ್ಪೀರಿ.

ಆನು ಮೊದಲು ಉಡಿಪಿಲ್ಲಿ ಇತ್ತಿದೆ. ಸಾಧಾರಣವಾಗಿ ಅಲ್ಲಿ ಇಪ್ಪ ಹೋಟೆಲುಗಳಲ್ಲಿ ಗಿರಾಕಿಗೊಕ್ಕೆ ಕೂಬಲೆ ವ್ಯವಸ್ಥೆ ಇರುತ್ತು. ಹಾಂಗೆಯೇ serve ಮಾಡುಲೆ servers ಇಕ್ಕು. ಇಲ್ಲದ್ದರೆ ಹಾಂಗಿಪ್ಪ ಹೋಟೆಲಿಂಗೆ ಅಲ್ಲಿ ಜನಂಗಳೂ ಕಡಮ್ಮೆ ಬಕ್ಕಷ್ಟೆ. ಹೀಂಗಿಪ್ಪ ಊರಿಂದ ಆನು ನಮ್ಮ silicon city ಬೆಂಗಳೂರಿಂಗೆ ಬಂದೆ ನೋಡಿ. ಇಲ್ಲಿ ಈ "ಸ್ಟಾಂಡಿಂಗ್ ಹೋಟೆಲ್" ಗಳದ್ದೇ ಕಾರುಬಾರು. ಪ್ರತಿಯೊಬ್ಬಂಗೂ ಅವನವನ ಕೆಲಸದ್ದೇ ತೆರಕ್ಕ. ಇವರ life styleಗೆ ಸರಿಯಾಗಿ fast food ಹೋಟೆಲ್ಸ್ ಇಲ್ಲಿ famous. ಹೆಚ್ಚಾಗಿ self service ಇಪ್ಪ ಇಲ್ಲಿ 2, 3 table ಹಾಕಿ ಇರುತ್ತವು. ಅಲ್ಲಿಯೇ ನಾವು ನಿಂದುಕೊಂಡು ತಿಂಬ್ರಾಣ ಮುಗಿಸಿಕೊಂಡು ಹೋಯೆಕ್ಕು.

ಎನಗೆ ಅವಿನಾಶ (ಎನ್ನ room mate) ಸುರುವಿಂಗೆ introduce ಮಾಡಿ ಕೊಟ್ಟದು ಈ "ಪ್ರಸಿದ್ಧಿ ಹೋಟೆಲ್", ಜಯನಗರ 9th blockಲಿ ಇಪ್ಪದು. ಇಲ್ಲಿ ಹಾಂಗೆ 2, 3 table ಹಾಕಿದ್ದವು. Customerಗೊ ಜಾಸ್ತಿ ಬತ್ತವು ಹೇಳಿ ಎದುರು ಇಪ್ಪ pedestrain walk ಲಿ ಸಾನ 2 table ಹಾಕಿದ್ದವು. ಇಲ್ಲಿ ಹಾಂಗೆ self service ಮಾಡ್ಕೊಂಡು, ನಿಂದುಕೊಂಡೇ ಎಂಗೊ ತಿಂಬದು ಮುಗಿಸಿಕೊಂಡು officeಗೆ ಹೋಪದು. ಕೆಲವು ಸರ್ತಿ ಈ ಹೋಟೆಲಿನ ಹೆಸರು ಎನಗೆ ನೆನಪ್ಪಿಂಗೆ ಬತ್ತಿಲ್ಲೆ. ಅಂಬಗ ಎಲ್ಲ ಆನು ಇದರ "ಆ ಸ್ಟಾಂಡಿಂಗ್ ಹೋಟೆಲ್ ಇದ್ದಲ್ಲದ" ಹೇಳಿ ಹೇಳುವುದು. ಹಾಂಗಾಗಿ ಎಂಗಳ ಮನೆಲಿ ಈ ಹೋಟೆಲ್ "ಸ್ಟಾಂಡಿಂಗ್ ಹೋಟೆಲ್" ಹೇಳಿಯೇ world famous ಆಯಿದು.

Wednesday 28 May, 2008

ವಚನಗಳು


Always remember MONEY is not everything; but make sure that you have made it a lot before talking such nonsense.

Monday 26 May, 2008

ಒಂದೊಂದೆ...

ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿ ತಿಳಿದು ನಗುವೆ ನೀನೇಕೆ
ಮಾತಾಡು ಓ ಮೌನ
ಮಾತಾಡು ಹೇ ಹೆ ಹೇ

ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ

ಸುಳ್ಳು ಸುಳ್ಳೆ ಮುನಿಸು
ಆ ನೂರು ಕಳ್ಳ ಕನಸು
ಆ ಮುಸ್ಸಂಜೆ ಮಬ್ಬಲ್ಲಿ ಮುತ್ತಿಟ್ಟೋರು ಯಾರು
ಕೆನ್ನೆ ನಿಂದ ಮುತ್ತು ನಂದ
ಬಗೆ ಹರಿಯದ ಒಗಟು ಇದೂ

ಮೊದಲು ಅಪ್ಪಿಕೊಂಡ, ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸಿಗುಟ್ಟಿದ್ದು ಯಾರೂ.

ಈ ವಿರಹದಲಿ ಅಡಗಿದೆಯೊ,
ಸನಿಹ ಸನಿಹದಲಿ ಯಾಕಿದೆ ವಿರಹ ಹೇಳುವೆಯಾ

ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನಾ

ಓ ಓ ಓ ಓ ಸಣ್ಣ ತಪ್ಪಿಗಾಗಿ, ಮಾತು ಸತ್ತು ಹೋಗಿ
ಆ ಮಂಕಾದ ರಾತ್ರಿಲಿ ಬಿಕ್ಕಳಿಸಿದ್ದು ಯಾರು
ತಪ್ಪು ನಿಂದ? ಒಪ್ಪು ನಂದ?
ಕೊನೆಗಾಣದ ಒಗಟು ಇದೂ

ಮುಂಜಾನೆ ನಿದ್ರೆಲಿ ನಾ ಹೇಳಲಾರದ ಕನಸ ನೀ ಸಿಕ್ಕಾಗ ಮಾತಡೊ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೆ
ಕನಸು ಅದನ್ಯಾಕೆ ಬಯಸಿದೆ ಮನಸು
ಹೇಳುವೆಯಾ

ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನ


ಚಿತ್ರ: ಇಂತಿ ನಿನ್ನ ಪ್ರೀತಿಯ
ಬರೆದವರು: ಯೋಗರಾಜ್ ಭಟ್

Thursday 15 May, 2008

Life is beautiful

Here is an article by Allen Partridge in Adobe blogs web page. He shares some of his experiences during the visit to Adobe Bangalore and the interactions with Director Engineering team. Interestingly I am part of this Director Engg team, so I am posting a link to this web page here :-).
http://blogs.adobe.com/shockwaves/2008/01/life_is_beautiful_on_bannergha.html

ನಿನ್ನ ನೋಡಲೆಂತೋ...


ನಿನ್ನ ನೋಡಲೆಂತೋ ಮಾತನಾಡಲೆಂತೋ
ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ
ಹೇಳಲೊಂಥರಾ ಥರಾ ಕೇಳಲೊಂಥರಾ ಥರಾ

ಕಣ್ಣಿಗೇನು ಕಾಣದೆ ಸ್ಪರ್ಶವೇನೂ ಇಲ್ಲದೆ
ಏನು ನನ್ನ ಕಾಡಿದೆ ಏನು ಅರ್ಥವಾಗದೆ
ಹಗಲು ರಾತ್ರಿ ನಿನದೇ ನೂರು ನೆನಪು ಮೂಡಿದೆ
ನನ್ನಲೇನೊ ಆಗಿದೆ ಹೇಳಲೇನು ಆಗದೆ
ಮನಸು ಮಾಯವೆಂತೋ ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ ನಯನ ಸೇರಲೆಂತೋ
ಮಿಲನವಾಗಲೆಂತೋ ಗಮನ ಎಲ್ಲೋ ಎಂತೋ
ಆಹಾ ಒಂಥರಾ ಥರಾ..

ಮೆಲ್ಲ ಮೆಲ್ಲ ಮೆಲ್ಲುವ ಸನ್ನೆಯಲ್ಲೆ ಕೊಲ್ಲುವ
ಸದ್ದೆ ಇರದ ಉತ್ಸವ ಪ್ರೀತಿ ಒಂದೆ ಅಲ್ಲವ
ಘಲ್ಲು ಘಲ್ಲು ಎನ್ನುವ ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ ತಾಳಲೆಂತು ಕಾದವ
ಹೃದಯದಲ್ಲಿ ಎಂತೋ ಉದಯವಾಯಿತೆಂತೋ
ಸನಿಹವಾಗಲೆಂತೋ ಕನಸು ಕಾಡಲೆಂತೋ
ಹರುಷ ಏನೋ ಎಂತೋ ಸೊಗಸ ಹೇಳಲೆಂತೋ
ಆಹಾ ಒಂಥರಾ ಥರಾ..


ಚಿತ್ರ: ಮುಸ್ಸಂಜೆ ಮಾತು
ಬರೆದವರು: ರಾಮ್ ನಾರಾಯಣ್

Monday 12 May, 2008

ಕಾಗದದ ದೋಣಿ...


ಕಾಗದದ ದೋಣಿ ನಮ್ಮ ಸಂಸಾರ
ಮುಳುಗದಂತೆ ನೋಡುವುದು ನಿನ್ನ ಭಾರ
ಪ್ರೀತಿ ತಂದು ತುಂಬುವುದೆ ನಿನ್ನ ಭಾರ
ಹೂವಿನಂತೆ ಸಾಗಿಸುವೆ ಸಂಸಾರ
ಸಖಿ ಸಖ...
ನಾನೂ ನೀನೂ ಜೋಡಿ.. ಜೀವನ ಹೂವಿನ ದಾರಿ.

ಆಗಸಕ್ಕೆ ಏಣಿಯ ಹಾಕಿ ಜಾರುವುದು ಏಕೆ ಪ್ರಾಣ ಸಖಿ
ಗಾಳಿ ಗೋಪುರ ಕಟ್ಟಲಾಗದೆ ಸೋಲುವುದು ಏಕೆ ಪ್ರಾಣ ಸಖ
ಬಂದಷ್ಟೆ ತಂದು ಇದ್ದಷ್ಟೆ ಉಂಡು ಹಾಯಾಗಿ ನಾವು ಬಾಳೋಣ
ಬೆಚ್ಚನೆ ಮನದ ಇಚ್ಛೆಯ ತಣಿಸಿ ಸ್ವರ್ಗಕ್ಕೆ ಕಿಚ್ಚು ಹಚ್ಚೋಣ.

ಬಾಳಿನಲ್ಲಿ ಬರೋ ಪ್ರತಿ ರಾತ್ರಿಯ ಮೊದಲ ರಾತ್ರಿ ಎನಿಸೋಣ
ಬಯಸದೆ ಬಂದ ಈ ಮ್ಯೆತ್ರಿಯ ಮಧುರವಾಗಿ ಉಳಿಸೋಣ
ದುಡುಕು ಹಾಳು ಸಿಡುಕು ಗೋಳು ಎಂದು ಬುದ್ಧಿಗೆ ತಿಳಿಸೋಣ
ದೂರದ ಬೆಟ್ಟ ನುಣ್ಣಗೆ ಎಂದು ನೊಂದ ಮನಸಿಗೆ ಕಲಿಸೋಣ.

ಚಿತ್ರ: ನಾನು ನೀನು ಜೋಡಿ

Wednesday 7 May, 2008

ಒಮ್ಮೆ ನಿನ್ನನ್ನು ಕಣ್ತುಂಬ...

ನನ್ನ ಹಳೆಯ ನೆನಪುಗಳ ಕೆದಕುತ ಬರೆಯುತ್ತಿದ್ದೇನೆ ಈ ಕೆಳಗಿನ ಸಿನಿಮಾ ಹಾಡಿನ ಸಾಲುಗಳನ್ನ...


ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೊ ಬಾನಲ್ಲೊ ಇನ್ನೆಲ್ಲೋ ನಾ ಕಾಣೆ

ಅರಳಿರುವ ಹೂವಿನಲ್ಲಿ ನಿನ್ನ ನೋಟವ
ಹರಿಯುತಿಹ ನೀರಿನಲ್ಲಿ ನಿನ್ನ ಓಟವ
ಇಂಪಾದ ಗಾನದಲ್ಲಿ ನಿನ್ನ ಮನದ ಭಾವವ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವ
ನವಿಲಾಡೋ ನಾಟ್ಯದಲ್ಲಿ ನಿನ್ನ ಚೆಂದವ
ತಂಪಾದ ಗಾಳಿಯಲ್ಲಿ ನೀನಾಡೊ ಆಟವ
ದಿನವೆಲ್ಲ ನಾ ಕಂಡೆ ನಾ ಕಂಡು ಬೆರಗಾದೆ

ಮಿನುಗುತಿಹ ತಾರೆಯೆಲ್ಲ ನಿನ್ನ ಕಣ್ಗಳೋ
ನಗುತಿರಲು ಭೂಮಿಗೆಲ್ಲ ಬೆಳದಿಂಗಳೋ
ಆ ಬೆಳ್ಳಿ ಮೋಡವೆಲ್ಲ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚೆಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲ ನೀ ನಡೆವ ಹಾದಿಯೋ
ನಿನ್ನಂತೆ ಯಾರಿಲ್ಲ ನಿನ್ನಲ್ಲೇ ಮನಸೆಲ್ಲ


ಚಿತ್ರ: ಗಾಳಿ ಮಾತು
ಬರೆದವರು: ಚಿ ಉದಯಶಂಕರ್

ಮಳೆ ನಿಂತು ಹೋದ ಮೇಲೆ...


ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನು ಉಳಿದು ಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ.

ನೋವಿನಲ್ಲಿ ಜೀವ ಜೀವ ಅರಿತ ನಂತರ
ನಲಿವು ಬೇರೆ ಏನಿದೆ ಏಕೆ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೇ ಸಾರಿ ನೀ ಕೇಳೆಯಾ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೇಗೆ ತಿಳಿಯದಾಗಿದೆ.

ಕಣ್ಣು ತೆರೆದು ಕಾಣುವ ಕನಸೇ ಜೀವನ
ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗಣ
ಕೇಳು ಜೀವವೆ ಏತಕೀ ಕಂಪನ
ಹೃದಯವು ಇಲ್ಲೆ ಕಳೆದೆ ಹೋಗಿದೆ
ಹುಡುಕಲೇ ಬೇಕೆ ತಿಳಿಯದಾಗಿದೆ.


ಚಿತ್ರ: ಮಿಲನ
ಬರೆದವರು: ಜಯಂತ ಕಾಯ್ಕಿಣಿ

Tuesday 6 May, 2008

ಮಳೆ ಬರುವ ಹಾಗಿದೆ...


ಮಳೆ ಬರುವ ಹಾಗಿದೆ ಮನವೀಗ ಹಾಡಿದೆ |
ಹೃದಯದಲ್ಲಿ ಕೂತು ನೀನು ನನ್ನ ಕೇಳ ಬೇಕಿದೆ
ಸವಿಗನಸು ಕಾಡಿದೆ ನಸು ನಗುವು ಮೂಡಿದೆ |
ಕಾಣದಂತೆ ನಿಂತು ನೀನು ನನ್ನ ನೋಡ ಬೇಕಿದೆ.

ನಿನ್ನ ನಗುವಿನಲ್ಲೆ ನನ್ನ ನಸುಕು
ನಿನ್ನ ರೂಪ ಧರಿಸಿ ಬಂದು ನಡೆದಾಡಿದೆ ಬೆಳಕು
ಗೆಳೆಯ ನೀನು ಬಳಿಯೇ ಅನುಕ್ಷಣವೂ ಬೇಕಾಗಿದೆ
ದಿನಕೆ ನೂರು ಬಾರಿ ನೀನು ಪ್ರೀತಿ ಹೇಳ ಬೇಕಿದೆ. ||

ಎದೆಯ ಬಾಗಿಲಲ್ಲಿ ನಿನ್ನ ಸುಳಿವು
ಸಣ್ಣ ಆಸೆಯಲ್ಲಿ ನಮ್ಮ ಸಹವಾಸದ ನಲಿವು
ಇನಿಯ ನಮ್ಮ ಒಲವು ಮೆರವಣಿಗೆ ಹೊರಟಾಗಿದೆ
ಮರೆತ ಹೋಗಿ ಚೂರು ನಟಿಸಿ ನಿನ್ನ ಕಾಡ ಬೇಕಿದೆ. ||


ಚಿತ್ರ: ಮೊಗ್ಗಿನ ಮನಸು
ಬರೆದವರು: ಜಯಂತ ಕಾಯ್ಕಿಣಿ

Monday 5 May, 2008

ನೆನಪು ನೆನಪು...


ನೆನಪು ನೆನಪು ಅವಳ ನೆನಪು ಸಾವೇ ಇರದ ಸವಿ ನೆನಪು
ನೆನಪು ನೆನಪು ಅವಳ ನೆನಪು ಕೊನೆಯೇ ಇರದ ಚಿರ ನೆನಪು
ಅವಳ ನಗು ಹುಣ್ಣಿಮೆಯ ಬೆಳಗು ನನ್ನೆದೆ ಬಾನಿಗೆ
ಅವಳ ದನಿ ರಾಗಗಳ ಗಣಿ ನನ್ನೆದೆ ಹಾಡಿಗೆ
ಧಮನಿ ಧಮನೀಲೂ ಪ್ರೀತಿ ಧ್ಯಾನ ಒಡಲ ಒಡನಾಡಿ ಅವಳೇ
ಉಸಿರು ಉಸಿರಲೂ ಪ್ರೀತಿ ಧ್ಯಾನ ಸುಖದ ಸುವ್ವಾಲಿ ಅವಳೇ.

ಅವಳುಳಿಸಿ ಹೋದ ಪ್ರೀತಿ ಎದೆಯಲ್ಲಿ ಅಮರವಾಯ್ತು
ಅದು ಸಾಕು ಸಾವಿರ ಜನ್ಮಕೂ
ಅವಳಾಡಿ ಹೋದ ಮಾತು ಕಿವಿಯಲ್ಲಿ ಕವನವಾಯ್ತು
ಅದೇ ನನ್ನ ಬಾಳಿಗೆ ಸ್ಫೂರ್ತಿಯೂ
ಹೊಸ ಉಲ್ಲಾಸ ಉತ್ಸಾಹ ಅವಳಿಂದ ನಾ ಕಂಡೆ ಈ ಜೀವ ಅವಳಲ್ಲವೇ
ಇಲ್ಲಿ ಏಕಾಂಗಿ ನಾನಲ್ಲ ಆ ನೋವು ನನಗಿಲ್ಲ ನನ್ನಲ್ಲಿ ಅವಳಿಲ್ಲವೇ.

ನನ್ನ ಬಾಳ ದಾರಿಯಲ್ಲಿ ನೆರಳಾಗಿ ಅವಳು ಇರಲು ನನ್ನೊಲವು ಬಾಡಲು ಸಾಧ್ಯವೇ
ನಾ ನೋಡೋ ಲೋಕದಲ್ಲಿ ಕಣ್ಣಾಗಿ ಅವಳು ಇರಲು ಜಗವಾಯ್ತು ಸ್ವರ್ಗವು ಮೆಲ್ಲಗೇ
ಆ ಬಿನ್ನಾಣ ಬಿಗುಮಾನ ತುಂಟಾಟ ಕುಡಿನೋಟ ಅಚ್ಚಾಯ್ತು ಎದೆ ಗೂಡಲೆ
ನನ್ನ ಸಂಗಾತಿ ತಂದಂತಹ ಸಂಪ್ರೀತಿ ಇರುವಾಗ ಬೇರೆಲ್ಲ ನನಗೇತಕೆ.


ಚಿತ್ರ: ಸವಿ ಸವಿ ನೆನಪು
ಬರೆದವರು: ಹೃದಯ ಶಿವ

Friday 2 May, 2008

ನನಗೂ ನಿನಗೂ...


ನನಗೂ ನಿನಗೂ ಕಣ್ಣಲ್ಲೇ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ
ಏನೋ ಆಗಿದೆ ನನಗಂತೂ ಸಂಶಯ.

ನಲುಮೆ ಸ್ನೇಹದ ನವಿರಾದ ಗ್ರಂಥವೇ
ಪುಟವ ತೆರೆಯುವಾಗ ಹಿತವಾದ ಗಂಧವೇ
ಮೊದಲ ನುಡಿಯಲಿ ನಾನೀಗ ತನ್ಮಯ
ಇನ್ನು ಕಥೆಯಲಿ ನೀನೆನ್ನ ಕರೆದೆಯ.

ಮೊದಲ ಸ್ಪರ್ಶಕೆ ಇನ್ನೆಲ್ಲಿ ಹೋಲಿಕೆ
ಮೃದುಲ ಭಾವಕೆ ನನ್ನೊಂದು ಕೋರಿಕೆ
ಎಲ್ಲ ತಿಳಿದರೂ ಯಾಕಿನ್ನೂ ಅಭಿನಯ
ವಿರಹ ಬಂದಿದೆ ಒಲವಿನ್ನು ನಿಶ್ಚಯ.


ಚಿತ್ರ: ಅರಮನೆ
ಬರೆದವರು: ಜಯಂತ ಕಾಯ್ಕಿಣಿ

Thursday 1 May, 2008

ನಿನ್ನ ಈ ಪ್ರೀತಿಗೆ...


ನಿನ್ನ ಈ ಪ್ರೀತಿಗೆ ಈ ನನ್ನ ಪ್ರಾಣವ ನಾ ನೀಡುವೆ
ನಿನ್ನ ಸಂತೋಷಕೆ ಏಳೇಳು ಜನ್ಮವು ನಾ ಕಾಯುವೆ
ನೀನಿಲ್ಲದೆ ಉಸಿರಾಡೊಲ್ಲ ನೀನಿಲ್ಲದೆ ಕಾಲ ಓಡೊಲ್ಲ
ನನ್ನ ಈ ಕಣ್ಣಿನ ಭಾಷೆಗೆ ಹೃದಯವೇ ಸಾಕ್ಷಿಯು
ನನ್ನ ಈ ಹೃದಯದ ಹಾಡಿಗೆ ದೇವರೆ ಸಾಕ್ಷಿಯು.

ಹೃದಯ ಒಂದು ಹೃದಯ ತನ್ನ ಪ್ರೀತಿನ ಹೇಳೋ ಕ್ಷಣ
ಜಗದಲಿ ಸಾವಿರ ಋತುಗಳು ಮೂಡಿ ಬರುತಾವೆ ಒಂದೇ ದಿನ
ಪ್ರೀತಿ ಗುರುತಿಗೆ ನೂರು ತಾಜಮಹಲ ರೆಪ್ಪೆಯಲ್ಲೆ ಕಟ್ಟಬಲ್ಲೆ ನಿನ್ನಾಣೆಗೂ
ಚಂದಿರಂಗು ತೇಲಿದಂಗೆ ಬೆಳದಿಂಗಳ ಕದ್ದು ಮುಚ್ಚಿ ತರಬಲ್ಲೆ ನನ್ನಾಣೆಗೂ
ಯುಗದಾಚೆಗೂ ಯುಗಳ ಗೀತೆನ ಹಾಡುವೆ ನನ್ನ ಪ್ರೀತಿ ಜೋಪಾನ
ನಮ್ಮ ಒಂದೊಂದು ಹೆಜ್ಜೆಯಲೂ ಪ್ರೀತಿಯೇ ಕಾವಲು
ಪ್ರತಿ ಕನಸಿಗೂ ಆಕಾಶವೆ ತೆರೆದಿರೋ ಬಾಗಿಲು.

ಒಲವು ಒಂದು ಒಲವು ಶುರುವಾಗೋದೆ ಗೊತ್ತಾಗದು
ಮನಸಿನ ಮೊದಲ ಕನಸಿನ ಹೆಜ್ಜೆ ಮರೆವಲ್ಲು ಮರೆಯಾಗದು
ಸುತ್ತೋ ಭೂಮಿಯಲ್ಲಿ ನಮಗೊಂದೇ ಚರಿತೆ
ಅನ್ನಿಸುವ ಹಾಗೆ ನಾವು ಬಾಳೋಣ ಬಾ
ನೂರು ಹೊತ್ತು ಸಾವು ನಮಗೆಲ್ಲೇ ಇದ್ದರೂ
ಒಂದೇ ಜೀವವಾಗಿ ಮುಂದೆ ಸಾಗೋಣ ಬಾ
ನಿನ್ನಿಂದಲೇ ನನ್ನ ಉಸಿರಾಟ ಹೌದೆಂದಿದೆ ಭೂಮಿ ತಿರುಗಾಟ
ನಮ್ಮ ಪ್ರತಿ ನಾಳೆಗೂ ಪ್ರೀತಿಯೇ ಬೆಳಕಿನ ತೋರಣ
ನಾಳೆ ಏನಾದರೂ ಸರಿಯೇ ಪ್ರೀತಿಯೇ ಕಾರಣ.


ಚಿತ್ರ: ಹನಿ ಹನಿ
ಬರೆದವರು: ಕೆ. ಕಲ್ಯಾಣ್

ಒಂದೇ ಸಮನೆ...


ಒಂದೇ ಸಮನೆ ನಿನ್ನುಸಿರು ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ ಮಳೆ ಬಿಲ್ಲಿನಂತೆ ನೋವು
ಕೊನೆಯಿರದ ಏಕಾಂತವೆ ಒಲವೇ.

ಜೀವಾ ಕಳೆವಾಮೃತಕೆ ಒಲವೆಂದು ಹೆಸರಿಡಬಹುದೇ
ಪ್ರಾಣಾ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ
ಹೊಂಗನಸಾಛಾದದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು ಕಣ್ಣ ಹನಿ ಸುಮ್ಮನೆ ಒಣಗಿ
ಅವಳನ್ನೆ ಜಪಿಸುವುದೆ ಒಲವೇ.

ನಾಲ್ಕು ಪದದಾ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೇ
ಮೂರು ಸ್ವರದಾ ಹಾಡಿನಲಿ ಹೃದಯವನು ಹರಿಬಿಡಬಹುದೇ
ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೇ.


ಚಿತ್ರ: ಗಾಳಿ ಪಟ
ಬರೆದವರು: ಯೋಗರಾಜ್ ಭಟ್

ಬಾ ಮಳೆಯೇ ಬಾ...


ಬಾ ಮಳೆಯೇ ಬಾ, ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೇ, ಹಿಂತಿರುಗಿ ಹೋಗದಂತೇ ಬಿಡದೆ ಬಿರುಸಾಗಿ ಸುರಿ.

ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ ಅವಳಿಲ್ಲಿ ಬಂದೊಡನೆ
ನಿಲ್ಲು ಕಾಲವೆ ನಿಲ್ಲು ನಮ್ಮ ತೆಕ್ಕೆ ಸಡಿಲಾಗದಂತೆ
ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ.

ಬೀಸು ಗಾಳಿಯೇ ಬೀಸು ನನ್ನೆದೆಯ ಆಸೆಗಳ
ಬೀಸು ಗಾಳಿಯೇ ಬೀಸು ನನ್ನೆದೆಯ ಆಸೆಗಳ
ನಲ್ಲೆ ಹೃದಯಕ್ಕೆ ತಲುಪಿಸು ಹಾಸು ಹೂಗಳ ಹಾಸು
ಅವಳು ಬರುವ ದಾರಿಯಲ್ಲಿ ಕಲ್ಲುಗಳು ತಾಗದಂತೆ
ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ.

ಬೀರು ದೀಪವೆ ಬೀರು ನಿನ್ನ ಹೊಂಬೆಳಕಲ್ಲಿ
ಬೀರು ದೀಪವೆ ಬೀರು ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ ಆರು ಬೇಗನೆ ಆರು
ಶೃಂಗಾರ ಶಯ್ಯೆಯಲ್ಲಿ ನಾಚಿ ನೀರಾಗುವಂತೆ
ಬಾ ಮಳೆಯೇ ಬಾ ಬಿಡದೆ ಬಿರುಸಾಗಿ ಸುರಿ ನಲ್ಲೆ ಹಿಂತಿರುಗಿ ಹೋಗದಂತೆ.


ಚಿತ್ರ: ಆಕ್ಸಿಡೆಂಟ್
ಬರೆದವರು: ಬಿ.ಆರ್. ಲಕ್ಷ್ಮಣ್ ರಾವ್

Wednesday 30 April, 2008

ಮಿಂಚಾಗಿ ನೀನು ಬರಲು...


ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ.

ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು.

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕನ್ನ ಕೊರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು.

ಚಿತ್ರ: ಗಾಳಿ ಪಟ
ಬರೆದವರು: ಜಯಂತ ಕಾಯ್ಕಿಣಿ

Friday 25 April, 2008

ಪದೇ ಪದೇ...


ಪದೇ ಪದೇ ನೆನಪಾದೇ ಪದೇ ಪದೇ ನೆನೆದೇ
ಪದೇ ಪದೇ ಮರೆಯಾದೇ ಪದೇ ಪದೇ ಕರೆದೇ
ಯಾವ ಜನ್ಮದಲಿ ನನ್ನ ನಿನ್ನ ನಡುವೆ ಪ್ರೀತಿ ಮೂಡಿತೇನೋ.

ಮೆಲ್ಲ ಮೆಲ್ಲ ನನ್ನಲ್ಲೆಲ್ಲ ನೀ ತುಂಬಿಕೊಂಡೆ ಒಲವೇ
ಕಳ್ಳ ಕಳ್ಳ ನನ್ನ ನಲ್ಲ ಕಣ್ಣಲ್ಲಿ ದೋಚಿ ಬಿಡುವೆ
ಹಗಲಲು ಕನಸು ಕನಸಲಿ ನೀ ಉಸಿರಿನ ಉಸಿರು ನೀ.

ಎಲ್ಲೋ ಎಲ್ಲೋ ಮುತ್ತು ಚೆಲ್ಲೋ ಪ್ರೀತಿನೇ ಸ್ವಾತಿ ಮಳೆಯೋ
ಅಲ್ಲೋ ಇಲ್ಲೋ ಎಲ್ಲ ಮೆಲ್ಲೋ ಪ್ರೀತಿನೇ ಜೇನ ಹೊಳೆಯೋ
ಪದಗಳೇ ಇರದ ಕವಿತೆ ಇದೂ ಸವಿ ಸವಿ ಸುಧೆಯಿದೂ.

ಚಿತ್ರ: ರಾಮ ಶಾಮ ಭಾಮ
ಬರೆದವರು: ಕವಿರಾಜ್

Thursday 24 April, 2008

ಕವಿತೆ ಕವಿತೆ...


ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ
ನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆ
ಓ ಒಲವೇ ನೀ ತಂದ ಹಾಡಿಗೆ ನಾ ಸೋತೆ.

ಅವಳು ಬರಲು ಮನದಲ್ಲಿ ಪದಗಳದೆ ಚಿಲುಮೆ
ಮನದ ಕಡಲ ದಡದಾಟೋ ಅಲೆಗಳಲೂ ನಲುಮೆ
ಹೊಮ್ಮುತಿದೆ ರಾಗದಲಿ ಸ್ವರ ಮೀರೋ ತಿಮಿರು
ಚಿಮ್ಮುತಿದೆ ಸುಳ್ಳಾಡುವ ಕವಿಯಾದ ಪೊಗರು.

ಮುಗಿಲ ಹೆಗಲ ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಕಿ ಎದೆ ಬಾಗಿಲಿಗೆ ಬಂತೋ ಪ್ರಣಯ
ಉನ್ಮಾದ ತಾನಾಗಿ ಹಾಡಾದೋ ಸಮಯ
ಏಕಾಂತ ಕಲ್ಲನ್ನು ಮಾಡುವುದೋ ಕವಿಯ.


ಚಿತ್ರ: ಗಾಳಿಪಟ
ಬರೆದವರು: ಹೃದಯಶಿವ

Wednesday 23 April, 2008

ಹೂ ಕನಸ ಜೋಕಾಲಿ...


ಹೂ ಕನಸ ಜೋಕಾಲಿ ಜೀಕುವೆ ನಾ ಜೊತೆಯಲ್ಲಿ
ಕಾಯುವೆನು ಕಣ್ಣಲ್ಲಿ ಜೊತೆಗಿರುವೆ ಚಿತೆಯಲ್ಲಿ
ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
ನಾ ನಿಂತ ನೆಲವನು ಕಾಲ ಬೆರಳು ತಬ್ಬಿದೆ
ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ
ನನ್ನನ್ನು ಕನಲುತಿದೆ ನಸು ನಾಚಿಕೆಯೋ
ಹೂ ಕನಸ ಜೋಕಾಲಿ ಜೀಕುವೆ ನಾ ಜೊತೆಯಲ್ಲಿ, ಜೋಕಾಲಿ.

ಬಿಡದ ಕನಸು ಬಿಡದ ನೋವು ಬಿಡದ ಮಿಡಿತ ಕೊನೆಯವರೆಗೆ
ಜೀವದ ಜೊತೆಗೆ ಎದೆಯ ಸುಡುವ ತಂಪು ನೆನಪುಗಳು
ಪ್ರತಿಯೊಬ್ಬರಲೂ ಕಾಡುವ ಅವಳು ಬೆಂಬಿಡದಂತಹ ಆ ನಗುವಿನ ನೆರಳು
ನಗುತ ಕೊಲುವ ಒಲವೋ.
ಹೂ ಕನಸ ಜೋಕಾಲಿ ಜೀಕುವೆ ನಾ ಜೊತೆಯಲ್ಲಿ
ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ, ಹೂ ಕನಸ ಜೋಕಾಲಿ.

ಮೊದಲ ನೋಟ ಮೊದಲ ಮಾತು ಮೊದಲ ಸ್ಪರ್ಷ ಮೊದಲ ಆಹಾ
ಹೃದಯದ ಒಳಗೆ ಉಸಿರ ಜೊತೆಗೆ ಪಯಣಿಸುವ ನೆನಪೋ
ಈ ಮೊಗ್ಗನ್ನ ಹೂವಾಗಿಸು ಬಾರೋ ನಾನಾಗುವೆನು ನಿನ್ನ ಹೂವಿನ ತೇರು
ಹೆಣ್ಣ ಮನವ ತಿಳಿಯೋ.
ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ
ಯಾಕಾಗಿ ಸಂಗಾತಿ ನೀ ಬರುವೆ ಜೊತೆಯಲ್ಲಿ
ಬಿಡದ ನಿನ್ನ ನಗೆಯ ಜೊತೆಗೆ ಮುಗಿದ ದಾರಿಯೋ
ಮಡಿದ ಕನಸಿನ ಮುಗಿಲಿಗೆ ಮೌನ ದೇಣಿಯೋ
ಈ ನಗುವ ಮುಖದಲ್ಲಿ ಬರಿ ನೋವಿದೆಯೋ
ಉಸಿರಾಡೋ ಶವಕಿಲ್ಲಿ ಸಾವಿದೆಯೋ
ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ, ಅಲೆಮಾರಿ.


ಚಿತ್ರ: ಇಂತಿ ನಿನ್ನ ಪ್ರೀತಿಯ
ಬರೆದವರು: ಯೋಗರಾಜ್ ಭಟ್

Wednesday 16 April, 2008

Forge Your Destiny in Fable: The Lost Chapters

The best ever game I enjoyed playing in Mac, Fable: The Lost Chapters. I am happy to say that I was part of the development team at Robosoft Technologies when we ported this game to Macintosh platform.

Apple iPhone India launch likely in Sept

Indians will no longer need to illegally buy, unlock and then use the most-desired item on gadget lovers' lists -- the Apple iPhone. Its much-awaited and delayed India launch is expected with telecom operator Vodafone in the first week of September.

For more info plz visit here.

Tuesday 12 February, 2008

PicLens: A good addon to your Firefox

PicLens instantly transforms your browser into a full-screen 3D experience for viewing images across the web. Our new interactive "3D Wall" lets you effortlessly drag, click, and zoom your way around a wall of pictures for an extraordinary viewing experience. The new search box lets you search the Web in full-screen using Google, Yahoo, SmugMug, Flickr, Photobucket, and DeviantArt. Just type a query and view all the results in the PicLens wall.

https://addons.mozilla.org/en-US/firefox/addon/5579

Friday 18 January, 2008

Review: Web2 Delight

Excellent work!

As of the first run I am really impressed by the great work done in Web2 Delight. The momentum I chose to select the Browse Sites, it instantly started previewing the items, waw! It also has a very user friendly interface to preview a video or to download an item, drag and drop and more.
We can create Collections or Smart collections On-The-Go to keep the things organized in order.

1. I found that the Cover-Flow-View is available only in Leopard but not in Tiger.
2. When I tried to view my Picassa page it loaded only up to 50 items. And I did not find any way to load the remaining photos.
3. I would appreciate more if it can load my dotMac galleries too :-).

Since this is a Beta version we may expect more enhancements in the Release one.

I enjoyed the most is the Slide-Show feature with transition effects and the background music.
Totally a good work indeed.

A nice app 4 Mac Users: "Web2 Delight" from GlobalDelight


I found this application interesting which delighted me to have a try on this Beta version. Having bought an iPod-Touch I was surfing for a nice application to load my gadget from various multimedia data available in the net.
Here comes Web2 Delight developed by Global Delight which has put this in show in now running Macworld 2008 Expo.
Also I heard that for features it offers just $15, which is a very small amount.

Software updates for iPhone & iPod-Touch by Apple

New software update enhances revolutionary iPhone
iPhone Software Update 1.1.3, a free software update available today via iTunes 7.5 or later, brings significant new features to iPhone. After installing the update, iPhone customers will be able to automatically find their location using the redesigned Maps application; text message multiple people in one message; create Web Clips for their favorite websites; customize their home screen; and watch movies rented from the new iTunes Movie Rentals right on their iPhone.

Major software upgrade available for iPod touch
With the installation of this major software upgrade, the best iPod becomes even more: the world’s best Wi-Fi mobile device. The upgrade—available from iTunes for just $19.99—adds five more great mobile applications to iPod touch: Mail, Maps, Stocks, Weather, and Notes. It also includes such new features as Web Clips, a customizable home screen, and the ability to watch iTunes Movie Rentals on iPod touch.

For more information visit Apple.