Thursday 30 July, 2009

ಯಾರೂ ಹಾಡದ...

ಯಾರೂ ಹಾಡದ ಎಲ್ಲೂ ಕೇಳದ |೨|
ಮನದಾಳದ ಆಲಾಪವೇ ಎದೆಯಾಳದ ಆತಂಕವೇ
ಮಿಡುಕಾಡಿದೆ ಹುಡುಕಾಡಿದೆ ಹಾಡಾಗಿದೆ ಈಗ |೨|
ಯಾರೂ ಹಾಡದ ಎಲ್ಲೂ ಕೇಳದ |೨|

ನಿನ್ನ ಕಣ್ಣ ದೋಣಿಯಲ್ಲೆ ನನ್ನ ಕನಸುಳಿದಿದೆ
ನಿನ್ನ ಮಿಡಿವ ಹೃದಯದಲ್ಲೆ ನೂರು ಮಾತುಳಿದಿದೆ
ಕಾಣದಂತಹ ತಾಣವನ್ನ ಸೇರುವಂತಹ ಆಸೆಗೆ
ಕಾದಿದೆ ಕಂಬನಿ ಒರೆಸುವ ಕೈಗೆ
ದೋಣಿಯೆ ಆಸರೆ ದೂರದ ಯಾನಕೆ
ಹರಿಯುವ ಮೊರೆಯುವ ತೊರೆಯೊಳಗೆ
ಯಾರೂ ಹಾಡದ ಎಲ್ಲೂ ಕೇಳದ |೨|

ನಿಮ್ಮ ದಾರಿ ನೀವೆ ತುಳಿದು ಸೇರ ಬೇಕು ಗುರಿ
ಬೆಳಗು ಗರಿಯ ಬಣ್ಣವೆಲ್ಲ ಹಾಡಿ ನಾ ಹಾಜರಿ
ಬಾನಿನ ಬಯಲಿಗೆ ಸಾರಸ ಹಾರಿವೆ
ಊರನು ಸೇರಲು ದಾರಿಯೊ ನೂರಿವೆ
ಪ್ರೀತಿಯೇ ಆಸರೆ ಬಾಳಿನ ಪಯಣಕೆ
ಮರಗಳ ನೆರಳಿವೆ ಬಿಸಿಲೊಳಗೆ
ಯಾರೂ ಹಾಡದ ಎಲ್ಲೂ ಕೇಳದ |೨|


ಚಿತ್ರ: ಕಾರಂಜಿ

Friday 3 July, 2009

ಗೊತ್ತಿದ್ರೆ ತಿಳಿಸಿ..

ಪ್ರಶ್ನೆ:
ನಮ್ಮ ಬೆರಳ ತುದಿಯನ್ನು ಸೂಜಿ ಮೊನೆಯಿಂದ ಚುಚ್ಚಿದಾಗ ರಕ್ತ ಹೊರಗೆ ಬರುತ್ತಲ್ಲಾ, ಅದು ಯಾಕೆ ಬರುತ್ತೆ?

ಉತ್ತರ ೧:
ಚುಚ್ಚಿದ್ದು ಯಾರು ಅಂತ ನೋಡೋಕೆ ರಕ್ತ ಹೊರಗೆ ಬರುತ್ತೆ.

ಉತ್ತರ ೨:
ಹಾಗೆನೇ ಒಳಗಡೆ ಇದ್ದು ಬೋರಾಗಿರುತ್ತೆ, ಅದಕ್ಕೆ ಹೊರಗಡೆ ಬರುತ್ತೆ.